ಈದೀಗ ಬಂದ ಸುದ್ದಿ: ಮೊದಿಯವರ ನೇತ್ರತ್ವದಲ್ಲಿ ನಿರ್ಮಲ ಸೀತಾರಾಮ್ ರವರು ಜನತೆಗೆ ನೀಡಿದರು  'ಸೂಪರ್‌ ಗಿಫ್ಟ್'!

ನವದೆಹಲಿ : ಮನೆಗಳನ್ನು ಖರೀದಿಸಲು ಸರಕಾರಿ ನೌಕರರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮನೆ ನಿರ್ಮಾಣ ಮೇಲಿನ ಸಾಲದ ಬಡ್ಡಿದರವನ್ನು ಕಡಿಮೆ ಮಾಡುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಘೋಷಣೆ ಮಾಡಿದ್ದಾರೆ.

ಅವರು ಇಂದು ನವದೆಹಲಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು, ಇದೇ ವೇಳೆ ಅವರು ತಮ್ಮ ಮಾತನ್ನು ಮುಂದುವರೆಸುತ್ತ ಈ ಕ್ರಮವು ಸರ್ಕಾರಿ ನೌಕರರಿಗೆ ಮನೆಗಳನ್ನು ನಿರ್ಮಿಸಲು ಸಹಕಾರಿಯಾಗುವುದರ ಜೊತೆಗೆ ವಸತಿ ಬೇಡಿಕೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಗುತ್ತಿಗೆ ಉತ್ಪಾದನೆ ಮತ್ತು ಏಕ-ಬ್ರಾಂಡ್ ಚಿಲ್ಲರೆ ಕ್ಷೇತ್ರದ ಮೇಲಿನ ಎಫ್‌ಡಿಐ ಮಾನದಂಡಗಳನ್ನು ಸಡಿಲಿಸುವುದು, ದ್ರವ್ಯತೆಯನ್ನು ಹೆಚ್ಚಿಸಲು ಮತ್ತು ದೇಶೀಯ ಬೇಡಿಕೆಯನ್ನು ಹೆಚ್ಚಿಸಲು ಸರ್ಕಾರ ತೆಗೆದುಕೊಂಡ ಕೆಲವು ಪ್ರಮುಖ ತೆಗೆದುಕೊಳ್ಳಲಾಗಿದೆ ಅಂತ ಹೇಳಿದರು.

ಇನ್ನು ಇದೇ ವೇಳೆ ಅವರು ಮಾತನಾಡುತ್ತ ದೇಶದ ಆರ್ಥಿಕ ಮಂದಗತಿಯ ಬಗ್ಗೆ ಸರ್ಕಾರಕ್ಕೆಸಂಪೂರ್ಣವಾಗಿ ತಿಳಿದಿದೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಪುನರುಜ್ಜೀವನಗೊಳಿಸಲು ಕ್ರಮಗಳನ್ನು ಕೇಂದ್ರ ಸರಕಾರ ಎಲ್ಲಾ ರೀತಿಯಲ್ಲಿ ತೆಗೆದುಕೊಳ್ಳುತ್ತಿದೆ ಅಂತ ಹೇಳಿದರು.

Comments