ಹೆಚ್ಡಿಕೆಗೆ 'ಮಿಣಿ ಮಿಣಿ' ಟ್ರೋಲ್ ಕಾಟ : ಪೊಲೀಸ್ ಆಯುಕ್ತರಿಗೆ 'JDS' ದೂರು


ಬೆಂಗಳೂರು : ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್ ಪತ್ತೆ ಮಾಜಿ ಸಿಎಂ ಕುಮಾರಸ್ವಾಮಿ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್ ಗೆ ಕಾರಣವಾಗಿದೆ.
ಮಂಗಳೂರು ವಿಮಾನನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ತುಂಬುವಂತಹ ಮಿಣಿ ಮಿಣಿ ಎನ್ನುವ ಪೌಡರ್ ನ್ನು ಬಾಕ್ಸ್ ನಲ್ಲಿ ತುಂಬಲಾಗಿತ್ತು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದರು, ಮಿಣಿಮಿಣಿ ಎಂಬ ಹೆಚ್ಡಿಕೆ ಬಳಸಿರುವ ಪದ ಸಖತ್ ಟ್ರೋಲ್ ಆಗುತ್ತಿದೆ.
 ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಂಗಳೂರು ಬಿಜೆಪಿ ಜೆಡಿಎಸ್ ಯುವ ಘಟಕ ದೂರು ನೀಡಿದೆ, ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ದೂರು ನೀಡಲಾಗಿದೆ. ಮಂಗಳೂರು ಉಪ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಕಾರ್ಯಕರ್ತರು, ಜಾಲತಾಣದಲ್ಲಿ ಅವಹೇಳನ ಮಾಡುವವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ

Comments