ಇದೀಗ ಬಂದ ಸುದ್ದಿ: ಭಾರತಕ್ಕೆ ಗುಡ್ ನ್ಯೂಸ್ ಮೋದಿ ಭೇಟಿಯಿಂದ ಬೆದರಿ ಗಲ್ವಾನ್ ಕಣಿವೆಯಲ್ಲಿ 1 ಕಿ.ಮೀ. ಹಿಂದೆ ಸರಿದ ಚೀನಾ!!




ಭಾರತ-ಚೀನಾ ಗಡಿಯಲ್ಲಿ ಕಳೆದ ಕೆಲ ವಾರಗಳಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಎರಡೂ ಕಡೆಗಳಲ್ಲಿ ಸಾವು ನೋವು ಸಂಭವಿಸಿದರ ನಂತರ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಸೈನಿಕರು ಬಹಳ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಮಧ್ಯೆ ಗಲ್ವಾನ್ ಕಣಿವೆಯ ಕೆಲಭಾಗಗಳಲ್ಲಿ ಬೀಡು ಬಿಟ್ಟಿದ್ದ ಚೀನಾದ ಸೈನಿಕರು ಹಿಂದಕ್ಕೆ ಸರಿಯುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.


ಗಲ್ವಾನ್‌ ಕಣಿವೆಯಲ್ಲಿ ಗಡಿ ಮೀರಿ ಬಂದಿದ್ದ ಚೀನಾ ಸೈನಿಕರು ಕೆಲ ಸಮಯದಿಂದ ಅಲ್ಲೇ ಟೆಂಟ್ ಹಾಕಿದ್ದರು. ಇದೀಗ ಚೀನಾದ ಸೈನಿಕರು ಟೆಂಟ್‌ ತೆರವುಗೊಳಿಸುತ್ತಿದ್ದು, ಅಲ್ಲದೇ ಗಾಲ್ವಾನ್ ನದಿ ಕಣಿವೆಯಿಂದ ಸುಮಾರು ಒಂದು ಕಿ.ಲೋ ಮೀಟರ್ ಹಿಂದಕ್ಕೆ ಸರಿದಿದ್ದು, ಮೂಲಗಳ ಪ್ರಕಾರ ಎರಡೂ ಕಡೆಯ ಸೈನಿಕರು ಬಫರ್ ಝೋನ್ ರಚಿಸಿದ್ದಾರೆ ಎನ್ನಲಾಗ್ತಿದೆ. ಉಭಯ ರಾಷ್ಟ್ರಗಳ ಕಮಾಂಡರ್‌ಗಳು ಮಾತುಕತೆ ನಡೆಸಿದ್ದು, ಆ ಒಪ್ಪಂದದ ಪ್ರಕಾರ 14ನೇ ವೀಕ್ಷಣಾ ಕೇಂದ್ರದಲ್ಲಿ ಸ್ಥಾಪಿಸಿದ್ದ ಟೆಂಟ್‌ಗಳನ್ನು ತೆರವುಗೊಳಿಸುತ್ತಿದೆ. ಚೀನಾ ಅಲ್ಲಿಂದ ಹಿಂದೆ ಸರಿಯುವ ಎಲ್ಲಾ ಲಕ್ಷಣಗಳು ಇವೆ ಎಂದು ಹೇಳಲಾಗ್ತಿದೆ.


ಕಳೆದ ಕೆಲ ವಾರಗಳಿಂದ ಭಾರತ ಚೀನಾ ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬಳಿಕ ಪರಿಸ್ಥಿತಿಯನ್ನು ಶಾಂತಗೊಳಿಸಲು ಭಾರತ ಚೀನಾ ಮಧ್ಯೆ ಹಲವು ಸುತ್ತಿನ ರಾಜ ತಾಂತ್ರಿಕ ಮಾತುಕತೆಗಳು ನಡೆದಿವೆ. ಅದಾಗ್ಯೂ ಗಡಿಭಾಗದಲ್ಲಿ ಅಘೋಷಿತ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಗಲ್ವಾನ್‌ ಪ್ರದೇಶದಲ್ಲಿ ನಡೆದ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಚೀನಾ ವಿರುದ್ಧ ಇಡೀ ಭಾರತೀಯ ನಾಗರಿಕರು ಸಿಡಿದೆದ್ದಿದ್ದರು. ಇದಕ್ಕೆ ಪೂರಕವಾಗಿ ಬಾಯ್ಕಾಟ್‌ ಚೀನಾ ಅಭಿಯಾನವೇ ಆರಂಭವಾಗಿತ್ತು. ನಂತರದ ದಿನಗಳಲ್ಲಿ ಗಾಯಗೊಂಡಿರುವ ಭಾರತೀಯ ಯೋಧರ ಆರೋಗ್ಯ ವಿಚಾರಿಸಲು ಸೇನೆಯ ಮುಖ್ಯಸ್ಥರು ತೆರಳಿದ್ದರು. ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಗಡಿ ಭಾಗಕ್ಕೆ ತೆರಳಿ ಭಾರತೀಯ ಸೈನಿಕರನ್ನು ಹುರಿದುಂಬಿಸಿದ್ದರು.

ಈ ಮಧ್ಯೆ ಪ್ರಧಾನಿ ಭೇಟಿ ಬೆನ್ನಲ್ಲೇ ಗಲ್ವಾನ್ ಕಣಿವೆಯಲ್ಲಿ ಬೀಡು ಬಿಟ್ಟಿದ್ದ ಚೀನಾ ಸೈನಿಕರು ತಮ್ಮ ಟೆಂಟ್‌ ಮತ್ತು ಇತರೆ ಸೊತ್ತುಗಳನ್ನು ತೆರುವುಗೊಳಿಸುತ್ತಿರುವುದು ಅಲ್ಲಿಂದ ಹಿಂದಕ್ಕೆ ಸರಿಯುವ ಲಕ್ಷಣಗಳಾಗಿವೆ ಎಂದು ಮೂಲಗಳು ತಿಳಿಸಿವೆ.

Comments