ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೋನಾ ನೆಪದಲ್ಲಿ ಸರ್ಕಾರ ಲೂಟಿ ಮಾಡಿದ್ದು, 3,328 ಕೋಟಿ ಹಣ ಕೊರೋನಾಗೆ ಖರ್ಚು ಮಾಡಿದ್ದಾರೆ. ಸಾನಿಟೈಜರ್, ಪಿಪಿ ಇ ಕಿಟ್, ಥರ್ಮಲ್ ಸ್ಯ್ಕಾನರ್ ನಲ್ಲಿ ಎರಡು ಪಟ್ಟು ಹಣ ನೀಡಿ ಖರೀದಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಕೊರೋನಾ ಸೋಂಕು ನಿವಾರಣೆಗೆ ಸಿಎಂ, ಪಿಎಂ ಕೇರ್ ಗೆ ಎಷ್ಟು ಹಣ ಬಂದಿದೆ ಎಂಬ ಮಾಹಿತಿ ನೀಡಬೇಕು. ಪಿಎಂ ಕೇರ್ ಗೆ ಸುಮಾರು 60ಸಾವಿರ ಕೋಟಿ ರೂಪಾಯಿ ಬಂದಿದೆ. ಪಿಎಂ ನಿಧಿಯಿಂದ ಕರ್ನಾಟಕಕ್ಕೆ ಎಷ್ಟು ಕೊಟ್ಟಿದ್ದಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
Comments
Post a Comment