ಜೈಪುರ್: ನೋಡಲು ಸುಂದರವಾಗಿದ್ದು, ಚೆನ್ನಾಗಿ ಇಂಗ್ಲಿಷ್ ಬಂದರಷ್ಟೇ ಸಾಲದು, ಸಿದ್ಧಾಂತಕ್ಕೆ ಬದ್ಧತೆ ತೋರುವುದು ಮುಖ್ಯ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರೋಕ್ಷವಾಗಿ ಸಚಿನ್ ಪೈಲಟ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಪೂರದ್ರೂಪಿಯಾಗಿ ಚೆನ್ನಾಗಿ ಇಂಗ್ಲಿಷ್ ಮಾತನಾಡಿ ಬಿಟ್ಟರೆ ರಾಜಕಾರಣದಲ್ಲಿ ಯಾರೂ ಮರುಳಾಗುವುದಿಲ್ಲ. ಪಕ್ಷದ ಸಿದ್ಧಾಂತದೊಂದಿಗೆ ಗಟ್ಟಿಯಾಗಿ ನಿಲ್ಲುವ, ದೇಶಕ್ಕಾಗಿ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುವ ಛಲ ಇದ್ದವರಿಗೆ ಮಾತ್ರ ರಾಜಕಾರಣದಲ್ಲಿ ಅವಕಾಶ ಎಂದು ಗೆಹ್ಲೋಟ್ ಹೇಳಿದ್ದಾರೆ.
ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಪಕ್ಷಕ್ಕೆ ಹಾಗೂ ದೇಶಕ್ಕೆ ದ್ರೋಹ ಮಾಡುವವರು ಅದೆಷ್ಟೇ ಸುಂದರವಾಗಿದ್ದರೂ ಯಾರೂ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸಚಿನ್ ಪೈಲಟ್ ಅವರನ್ನು ಗೆಹ್ಲೋಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕಾರಣದಲ್ಲಿ ನಾವು ಪಟ್ಟ ಶ್ರಮ ಹಾಗೂ ಕಷ್ಟದ ಅರಿವಿರದ ಹೊಸ ಪೀಳಿಗೆ ಪರಿಶ್ರಮ ಪಡದೇ ಅಧಿಕಾರಕ್ಕಾಗಿ ಹಾತೋರೆಯುತ್ತಿದೆ. ಇದು ಭಾರತದ ರಾಜಕಾರಣಕ್ಕೆ ಮಾರಕ ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
40 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತಿರುವುದು ಆಸೆಗಾಗಿ ಅಲ್ಲ. ಬದಲಿಗೆ ಜನಸೇವೆಗಾಗಿ, ಪಕ್ಷದ ಉಳಿವಿಗಾಗಿ ಎಂದು ಗೆಹ್ಲೋಟ್ ಹೇಳಿದ್ದಾರೆ. ಯುವ ಪೀಳಿಗೆಗೆ ಪಕ್ಷದಲ್ಲಿ ಖಂಡಿತ ಉತ್ತಮ ಭವಿಷ್ಯವಿದೆ. ಆದರೆ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಕಲಿಯುವ ತಾಳ್ಮೆಯಾದರೂ ಅವರಲ್ಲಿ ಇರಬೇಕು ಎಂದು ಸಚಿನ್ ಪೈಲಟ್ ಅವರನ್ನು ಚುಚ್ಚಿದರು.
ಡಿಸಿಎಂ ಪಟ್ಟ, ಅಧ್ಯಕ್ಷ ಹುದ್ದೆ ಕಳೆದುಕೊಂಡ ಪೈಲಟ್: ಸೆಣೆಸಾಟದಲ್ಲಿ ಇನ್ನೂ ಗೆದ್ದಿಲ್ಲ ಗೆಹ್ಲೋಟ್!
ಸಚಿನ್ ಪೈಲಟ್ ವಿರುದ್ಧ ಗೆಹ್ಲೋಟ್ ಪರೋಕ್ಷ ದಾಳಿಯನ್ನು ನೋಡಿದರೆ ಪೈಲಟ್ ಅವರನ್ನು ಮರಳಿ ಸ್ವಾಗತಿಸಲು ಕಾಂಗ್ರೆಸ್ ಸಿದ್ಧವಿಲ್ಲ ಎಂದೇ ಕಂಡುಬರುತ್ತಿದೆ.
ಸ್ಪೂರದ್ರೂಪಿಯಾಗಿ ಚೆನ್ನಾಗಿ ಇಂಗ್ಲಿಷ್ ಮಾತನಾಡಿ ಬಿಟ್ಟರೆ ರಾಜಕಾರಣದಲ್ಲಿ ಯಾರೂ ಮರುಳಾಗುವುದಿಲ್ಲ. ಪಕ್ಷದ ಸಿದ್ಧಾಂತದೊಂದಿಗೆ ಗಟ್ಟಿಯಾಗಿ ನಿಲ್ಲುವ, ದೇಶಕ್ಕಾಗಿ ನಿಸ್ವಾರ್ಥ ಭಾವನೆಯಿಂದ ಸೇವೆ ಸಲ್ಲಿಸುವ ಛಲ ಇದ್ದವರಿಗೆ ಮಾತ್ರ ರಾಜಕಾರಣದಲ್ಲಿ ಅವಕಾಶ ಎಂದು ಗೆಹ್ಲೋಟ್ ಹೇಳಿದ್ದಾರೆ.
ಸ್ವಾರ್ಥಕ್ಕಾಗಿ, ಅಧಿಕಾರಕ್ಕಾಗಿ ಪಕ್ಷಕ್ಕೆ ಹಾಗೂ ದೇಶಕ್ಕೆ ದ್ರೋಹ ಮಾಡುವವರು ಅದೆಷ್ಟೇ ಸುಂದರವಾಗಿದ್ದರೂ ಯಾರೂ ಅವರನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಸಚಿನ್ ಪೈಲಟ್ ಅವರನ್ನು ಗೆಹ್ಲೋಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜಕಾರಣದಲ್ಲಿ ನಾವು ಪಟ್ಟ ಶ್ರಮ ಹಾಗೂ ಕಷ್ಟದ ಅರಿವಿರದ ಹೊಸ ಪೀಳಿಗೆ ಪರಿಶ್ರಮ ಪಡದೇ ಅಧಿಕಾರಕ್ಕಾಗಿ ಹಾತೋರೆಯುತ್ತಿದೆ. ಇದು ಭಾರತದ ರಾಜಕಾರಣಕ್ಕೆ ಮಾರಕ ಎಂದು ಗೆಹ್ಲೋಟ್ ಅಭಿಪ್ರಾಯಪಟ್ಟಿದ್ದಾರೆ.
40 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ಮುಖ್ಯಮಂತ್ರಿ ಕುರ್ಚಿ ಮೇಲೆ ಕುಳಿತಿರುವುದು ಆಸೆಗಾಗಿ ಅಲ್ಲ. ಬದಲಿಗೆ ಜನಸೇವೆಗಾಗಿ, ಪಕ್ಷದ ಉಳಿವಿಗಾಗಿ ಎಂದು ಗೆಹ್ಲೋಟ್ ಹೇಳಿದ್ದಾರೆ. ಯುವ ಪೀಳಿಗೆಗೆ ಪಕ್ಷದಲ್ಲಿ ಖಂಡಿತ ಉತ್ತಮ ಭವಿಷ್ಯವಿದೆ. ಆದರೆ ರಾಜಕಾರಣದ ಎಲ್ಲಾ ಪಟ್ಟುಗಳನ್ನು ಕಲಿಯುವ ತಾಳ್ಮೆಯಾದರೂ ಅವರಲ್ಲಿ ಇರಬೇಕು ಎಂದು ಸಚಿನ್ ಪೈಲಟ್ ಅವರನ್ನು ಚುಚ್ಚಿದರು.
ಡಿಸಿಎಂ ಪಟ್ಟ, ಅಧ್ಯಕ್ಷ ಹುದ್ದೆ ಕಳೆದುಕೊಂಡ ಪೈಲಟ್: ಸೆಣೆಸಾಟದಲ್ಲಿ ಇನ್ನೂ ಗೆದ್ದಿಲ್ಲ ಗೆಹ್ಲೋಟ್!
ಸಚಿನ್ ಪೈಲಟ್ ವಿರುದ್ಧ ಗೆಹ್ಲೋಟ್ ಪರೋಕ್ಷ ದಾಳಿಯನ್ನು ನೋಡಿದರೆ ಪೈಲಟ್ ಅವರನ್ನು ಮರಳಿ ಸ್ವಾಗತಿಸಲು ಕಾಂಗ್ರೆಸ್ ಸಿದ್ಧವಿಲ್ಲ ಎಂದೇ ಕಂಡುಬರುತ್ತಿದೆ.