ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿ ಸಂಭವಿಸಿದ್ದು ಸಂತ್ರಸ್ತರಿಗೆ ಪರಿಷ್ಕೃತ ಪರಿಹಾರದ ಮಾರ್ಗಸೂಚಿಯನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ.
ಪ್ರಕೃತಿ ವಿಕೋಪದಿಂದಾಗಿ ಹಾನಿಗೊಳಗಾದ ಮನೆಗಳಲ್ಲಿನ ಬಟ್ಟೆ, ಬರೆ, ದಿನಬಳಕೆ ವಸ್ತುಗಳು ಪಾತ್ರೆಗಳು ಇತ್ಯಾದಿ ಗೃಹೋಪಯೋಗಿ ವಸ್ತುಗಳು ಹಾನಿಯಾದಲ್ಲಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಪ್ರತಿ ಕುಟುಂಬಕ್ಕೆ 3,800 ರೂಪಾಯಿಗಳನ್ನು ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಪಾವತಿಸಲು ಅವಕಾಶವಿದೆ.
ಆದರೆ ರಾಜ್ಯ ಸರ್ಕಾರ ರಾಜ್ಯದ ನಿಧಿಯಿಂದ ಹೆಚ್ಚುವರಿಯಾಗಿ ರೂ. 6,200 ಸೇರಿಸಿ ಪ್ರತಿ ಸಂತ್ರಸ್ಥ ಕುಟುಂಬಕ್ಕೆ 10,000 ಪರಿಹಾರ ನೀಡಲು ನಿರ್ಧರಿಸಿದೆ ಎಂದು ಕಂದಾಯ ಇಲಾಖೆ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಇನ್ನು ಮನೆಹಾನಿಯಾದ ಕುಟುಂಬಗಳಿಗೂ ನೀಡುತ್ತಿರುವ ಪರಿಹಾರ ಮೊತ್ತವನ್ನು ಪರಿಷ್ಕೃರಣೆ ಮಾಡಲಾಗಿದೆ. ಶೇ. 75 ಕ್ಕಿಂತ ಹೆಚ್ಚು ಸಂಪೂರ್ಣ ಮನೆಹಾನಿಗೆ 5 ಲಕ್ಷ ರೂಪಾಯಿ ಪರಿಹಾರ, ಶೇ. 25 ರಿಂದ 75 ರಷ್ಟು ಭಾಗಶಃ ಮನೆಹಾನಿಗೊಳಗಾದವರಿಗೆ ಹಾನಿಗೊಳಗಾದ ಮನೆಯನ್ನು ಕೆಡವಿ ಹೊಸತಾಗಿ ನಿರ್ಮಿಸಲು 5 ಲಕ್ಷ ಪರಿಹಾರ ನೀಡಲಾಗುತ್ತದೆ.
ಇನ್ನು ಶೇ. 25 ರಿಂದ 75 ರಷ್ಟು ಭಾಗಶಃ ಮನೆ ಹಾನಿಗೊಳಗಾದವರಿಗೆ ದುರಸ್ಥಿ ಕಾರ್ಯ ನಡೆಸಲು 3 ಲಕ್ಷ ಪರಿಹಾರ ನೀಡುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಅಲ್ಲದೆ 15 -25 ರಷ್ಟು ಅಲ್ಪಸ್ವಲ್ವ ಮನೆಹಾನಿಗೆ 50,000 ರಷ್ಟು ಪರಿಷ್ಕೃತ ಪರಿಹಾರ ಮೊತ್ತ ನೀಡಿಲು ಸರ್ಕಾರ ನಿರ್ಧರಿಸಿದೆ.
ಸದ್ಯ ರಾಜ್ಯದಲ್ಲಿ 56 ತಾಲೂಕುಗಳಲ್ಲಿ ಪ್ರವಾಹ ಪರಿಸ್ಥಿತಿ ಇದೆ. ಪ್ರವಾಹದಿಂದ 885 ಗ್ರಾಮಗಳಲ್ಲಿ ಹಾನಿ ಉಂಟಾಗಿದೆ. ಸುಮಾರು 3000 ಮನೆಗಳಿಗೆ ಹಾನಿಯಾಗಿವೆ, 80,000 ಹೆಕ್ಟೇರಿ ಪ್ರದೇಶದಲ್ಲಿ ಕೃಷಿಗೆ ಹಾನಿ ಉಂಟಾಗಿದೆ. ಅಲ್ಲದೆ3,500 ಕಿಲೋ ರಸ್ತೆ ಹಾನಿಗೊಳಪಟ್ಟಿದೆ.
ಸರ್ಕಾರದಿಂದ ಬಂತು ಭರ್ಜರಿ ಆಫರ್ !!ಸಂತ್ರಸ್ತರಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪರಿಹಾರ ಮೊತ್ತವೆಷ್ಟು ಗೊತ್ತಾ?
Comments
Post a Comment