ಇದೀಗ ಬಂದ ಸುದ್ದಿ:ಸಚಿನ್ ಪೈಲಟ್’ ಈಗ ಬಿಜೆಪಿಗೆ ಲ್ಯಾಂಡಿಂಗ್..?‘ಸಿಂಧಿಯಾ ಮಾದರಿ’ ಪುನರಾವರ್ತನೆ..?

ಮಧ್ಯಪ್ರದೇಶದ ಜ್ಯೋತಿರಾಧಿತ್ಯ ಸಿಂಧಿಯಾಗೂ ರಾಜಸ್ತಾನದ ಸಚಿನ್ ಪೈಲಟ್‌ಗೂ ವ್ಯತ್ಯಾಸಗಳು ಇರುವಷ್ಟೇ ಸಾಮ್ಯತೆಗಳೂ ಇವೆ..! ಇವರಿಬ್ಬರ ಬಂಡಾಯದ ಪರಿಣಾಮ ಮಾತ್ರ ನೇರವಾಗಿ
ಕೊರೊನಾ ವೈರಸ್ ಆರ್ಭಟದ ನಡುವೆ ಇದೀಗ ರಾಜಸ್ತಾನದಲ್ಲಿ ರಾಜಕೀಯ ಮೇಲಾಟ ತಾರಕಕ್ಕೇರಿದೆ. ಮಧ್ಯಪ್ರದೇಶದಲ್ಲಿ ಕಮಲ್‌ನಾಥ್ ಸಾರಥ್ಯದ ಕಾಂಗ್ರೆಸ್ ಸರ್ಕಾರವನ್ನು ಜ್ಯೋತಿರಾಧಿತ್ಯ ಸಿಂಧಿಯಾ ಉರುಳಿಸಿದ ರೀತಿಯಲ್ಲೇ, ರಾಜಸ್ತಾನದಲ್ಲಿ ಅಶೋಕ್ ಗೆಹ್ಲೋಟ್ ಸಾರಥ್ಯದ ಕಾಂಗ್ರೆಸ್‌ ಸರ್ಕಾರವನ್ನು ಮುಗಿಸಲು ಸಚಿನ್ ಪೈಲಟ್ ಸನ್ನದ್ಧರಾಗಿದ್ದಾರೆ..!
ರಾಜಸ್ಥಾನ ಸಿಎಂ ಅಶೋಕ್‌ ಗೆಹ್ಲೋಟ್‌ ಜೊತೆಗೆ ಸುದೀರ್ಘ ಕಾಲದಿಂದಲೂ ಮುಸುಕಿನ ಗುದ್ದಾಟ ನಡೆಸಿಕೊಂಡು ಬರುತ್ತಲೇ ಇದ್ದ ಸಚಿನ್ ಪೈಲಟ್, ಅನಿವಾರ್ಯ ಕಾರಣಗಳಿಂದಾಗಿ ಕಾಂಗ್ರೆಸ್‌ನಲ್ಲೇ ಉಳಿದಿದ್ದರು. ವೈಯಕ್ತಿಕ ವರ್ಚಸ್ಸು ಇದ್ದರೂ ಕೂಡಾ ರಾಜಸ್ತಾನದ ಡಿಸಿಎಂ ಪಟ್ಟ ಗಿಟ್ಟಿಸಲು ಹಾಗೂ ರಾಜಸ್ತಾನ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಪಡೆಯಲು ಅವರು ಹೋರಾಟ ನಡೆಸಬೇಕಾಗಿತ್ತು. ಇದೀಗ ಕಾಂಗ್ರೆಸ್‌ ಜೊತೆಗಿನ ಸಚಿನ್ ಪೈಲಟ್ ಸಖ್ಯ ಅಧಿಕೃತವಾಗಿ ಅಂತ್ಯವಾಗಿದೆ..!
ಹಾಗೆ ನೋಡಿದ್ರೆ, ಮಧ್ಯಪ್ರದೇಶದಲ್ಲಿ ಆಪರೇಷನ್ ಸಿಂಧಿಯಾ ನಡೆಸುವ ಮುನ್ನವೇ ರಾಜಸ್ತಾನದ ಮೇಲೆ ಬಿಜೆಪಿ ಕಣ್ಣಿಟ್ಟಿತ್ತು ಎಂಬ ಮಾಹಿತಿ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರ್ತಿದೆ. ಆದರೆ, ಕೊರೊನಾ ವೈರಸ್ ಸೇರಿದಂತೆ ಇನ್ನಿತರ ಅನಿವಾರ್ಯ ಕಾರಣಗಳಿಂದಾಗಿ ಆಗ ರಾಜಸ್ಥಾನ ಸರ್ಕಾರವನ್ನು ಅಲುಗಿಸಲು ಆಗಿರಲಿಲ್ಲ. ಯಾವಾಗ ಈ ವಿಚಾರ ರಾಜಸ್ತಾನ ಸಿಎಂ ಅಶೋಕ್‌ ಗೆಹ್ಲೋಟ್‌ ಅವರ ಕಿವಿಗೆ ಬಿತ್ತೋ, ಆಗಲೇ ಅವರು ಸಿಡಿದೆದ್ದಿದ್ದರು. ಮೊದಲೇ ರೊಚ್ಚಿಗೆದ್ದ ಸರ್ಪದಂತಾಗಿದ್ದ ಸಚಿನ್ ಪೈಲಟ್‌ರನ್ನು ಕೆಣಕಿದರು..! ಕಾಂಗ್ರೆಸ್ ಸರ್ಕಾರ ಬೀಳಿಸುವ ಹುನ್ನಾರದ ಕುರಿತಂತೆ ತನಿಖೆ ನಡೆಸಲು ತಂಡ ರಚಿಸಿದರು..! ಬಿಜೆಪಿ ಜೊತೆ ಸೇರಿ ಕಾಂಗ್ರೆಸ್‌ ಸರ್ಕಾರ ಉರುಳಿಸಿದ ಆರೋಪದ ಮೇಲೆ ತಮ್ಮದೇ ಸರ್ಕಾರದ ಡಿಸಿಎಂ ಹಾಗೂ ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ತನಿಖೆಗೆ ಮುಂದಾದ್ರು..!
​ಸಿಡಿದೆದ್ದ ಸಚಿನ್ ಕೊಟ್ಟಿದ್ದಾರೆ ಶಾಕ್..!
ಯಾವಾಗ ತಮ್ಮ ವಿರುದ್ಧವೇ ತನಿಖೆಯ ಮಾತುಗಳು ಕೇಳಿಬಂದವೋ ಆಗ ಸಚಿನ್ ಪೈಲಟ್ ಸಹಜವಾಗಿಯೇ ಕ್ರುದ್ಧರಾದರು. ರಾಜಸ್ತಾನ ಕಾಂಗ್ರೆಸ್ ಸರ್ಕಾರದ ಡಿಸಿಎಂ ಹಾಗೂ ರಾಜಸ್ತಾನ ರಾಜ್ಯದ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾದ ನನ್ನನ್ನೇ, ಸರ್ಕಾರ ಉರುಳಿಸಲು ಯತ್ನಿಸಿದ ಆರೋಪದ ಮೇಲೆ ತನಿಖೆಗೆ ಕರೆಯೋದು ಎಷ್ಟು ಸರಿ ಎಂದು ಪ್ರಶ್ನಿಸಿದ ಸಚಿನ್, ಪಕ್ಷದಿಂದ ಹೊರಬರುವ ಮಾತುಗಳನ್ನಾಡಿದರು.
ಈ ವೇಳೆ, ಕಾಂಗ್ರೆಸ್ ಹೈಕಮಾಂಡ್‌ ಒತ್ತಡಕ್ಕೆ ಸಿಲುಕಿತು. ಸಚಿನ್ ಪೈಲಟ್ ಜೊತೆಗೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಮಾತುಕತೆ ನಡೆಸಿದರು. ಆದ್ರೆ, ಈ ಎಲ್ಲಾ ಮಾತುಗಳೂ ವಿಫಲವಾಗುವ ಸಾಧ್ಯತೆಗಳು ನಿಚ್ಛಳವಾಗಿಯೇ ಇತ್ತು. ಇದೀಗ ಅಧಿಕೃತವಾಗಿ ಸಚಿನ್ ಪೈಲಟ್ ಕಾಂಗ್ರೆಸ್‌ನಿಂದ ಹೊರಬರಲು ನಿರ್ಧರಿಸಿದ ಬೆನ್ನಲ್ಲೇ, ಡಿಸಿಎಂ ಪಟ್ಟದಿಂದ ಹಾಗೂ ರಾಜಸ್ತಾನ ಕಾಂಗ್ರೆಸ್ ಅಧ್ಯಕ್ಷ ಪಟ್ಟದಿಂದ ಅವರನ್ನು ಕೆಳಗಿಳಿಸಲಾಗಿದೆ.

ಮಧ್ಯಪ್ರದೇಶದಲ್ಲಿ ಜ್ಯೋತಿರಾಧಿತ್ಯ ಸಿಂಧಿಯಾ ಸಿಎಂ ಪಟ್ಟದ ಆಕಾಂಕ್ಷಿ ಆಗಿರಲಿಲ್ಲ. ಅವರು ರಾಷ್ಟ್ರ ರಾಜಕಾರಣಕ್ಕೆ ವಾಲುವ, ರಾಜ್ಯಸಭೆ ಸದಸ್ಯರಾಗುವ ಹಾಗೂ ಮುಂದಿನ ದಿನಗಳಲ್ಲಿ ಕೇಂದ್ರ ಮಂತ್ರಿಯಾಗುವ ಹಾದಿಯಲ್ಲಿ ಇದ್ದಾರೆ. ಆದ್ರೆ, ರಾಜಸ್ತಾನದಲ್ಲಿ ಸಚಿನ್ ಪೈಲಟ್ ಹಾದಿ ಬೇರೆಯೇ ಆಗಿದೆ. ಅವರು ಅಶೋಕ್‌ ಗೆಹ್ಲೋಟ್‌ ಸ್ಥಾನಕ್ಕೆ ಬಂದು ಸಿಎಂ ಆಗುವ ಕನಸು ಕಾಣುತ್ತಿದ್ದಾರೆ.
ಮಾಜಿ ಸಿಎಂ, ರಾಜಸ್ಥಾನ ಬಿಜೆಪಿ ಅಧಿನಾಯಕಿ ವಸುಂಧರಾ ರಾಜೆ ಅವರು ಇದಕ್ಕೆಲ್ಲಾ ಆಸ್ಪದ ಕೊಡುವವರಲ್ಲ. ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್ ಚೌಹಾಣ್ ಸಿಎಂ ಆದ ಮಾದರಿಯಲ್ಲೇ, ರಾಜಸ್ತಾನದಲ್ಲಿ ಸಚಿನ್ ಪೈಲಟ್ ಬಿಜೆಪಿಗೆ ಬೆಂಬಲ ಕೊಟ್ಟು, ವಸುಂಧರಾ ರಾಜೆ ಅವರನ್ನು ಸಿಎಂ ಸ್ಥಾನಕ್ಕೆ ಮತ್ತೆ ತರಲಿ ಅನ್ನೋದು ಬಿಜೆಪಿ ಅಪೇಕ್ಷೆ. ಇದೊಂದು ಕಾರಣದಿಂದಲೇ ಹಲವು ದಿನಗಳಿಂದ ವಿಷಯ ನೆನೆಗುದಿಗೆ ಬಿದ್ದಿತ್ತು. ಇದೀಗ ತನಿಖೆಯ ಸಿಟ್ಟಿಗೆ ಸಚಿನ್ ಸಿಡಿದೆದ್ದ ಕಾರಣದಿಂದ ರಾಜಸ್ತಾನ ಸರ್ಕಾರದ ಸ್ಥಿತಿ ಅಯೋಮಯವಾಗಿದೆ.

Comments